ಶ್ರೀಸ.ಸ.ರಾನಡೆ ಮಹಾರಾಜರ ಪುಣ್ಯ ಸ್ಮರಣೋ ತ್ಸವ ಮಂಗಲ

ಬೆಳಗಾವಿ 6 : ಬೆಳಗಾವಿಯ ಹಿಂದವಾಡಿ ನಗರದ ಶ್ರೀ ಸಮರ್ಥ ಸದ್ಗುರು ರಾನಡೆ ಮಹಾರಾಜರ ಆಶ್ರಮದಲ್ಲಿ ಶ್ರೀ ಕ್ಷೇತ್ರ ಇಂಚಗೇರಿ ಮಠದ ಶ್ರೀ ಸಮರ್ಥ ಸದ್ಗುರು ಭಾವೂಸಾಹೇಬ ಮಹಾರಾಜರ ಪರಮ ಶಿಷ್ಯರಾದ ಶ್ರೀ ಸಮರ್ಥ ಸದ್ಗುರು ರಾನಡೆ ಮಹಾರಾಜರ 65 ಪುಣ್ಯ ಸ್ಮರಣೋತ್ಸವ ನಿಮಿತ್ಯ ಆಧ್ಯಾತ್ಮ ಸಪ್ತಾಹವು ಇಂದು ಸೋಮವಾರ ದಿನಾಂಕ 6 ಜೂನ 2022 ರಂದು ಇಂಚಗೇರಿ ಮಠದ ಸದ್ಗುರುಗಳಾದ ಶ್ರೀ ಸಮರ್ಥ ರೇವಣಸಿದ್ದೇಶ್ವರ ಮಹಾರಾಜರ ಆಶಿರ್ವಚನ ಹಾಗೂ ಪುಷ್ಪ ವೃಷ್ಠಿಯೊಂದಿಗೆ ಮಂಗಲಗೊಂಡಿತು ಈ ಆಧ್ಯಾತ್ಮ ಸಪ್ತಾಹದಲ್ಲಿ ಶ್ರೀ ತಾರಾಚಂದ ಮಹಾರಾಜರು. ಶ್ರೀ ಎಂ.ಬಿ.ಜಿರಲಿ ಹಿರಿಯ ನ್ಯಾಯವಾದಿಗಳು ಹಾಗೂ ಇತರ ಧಾರ್ಮಿಕ ಮುಖಂಡರು ಶ್ರೀ ಕ್ಷೇತ್ರ ಇಂಚಗೇರಿ ಮಠದ ಸದ್ಭಕ್ತರು ಉಪಸ್ಥಿತರಿದ್ದರು