ಯಮಕನಮರಡಿ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

ಬೆಳಗಾವಿ: ಬೆಳಗಾವಿ ತಾಲೂಕಿನ ಕೇದನೂರು, ಮಣ್ಣಿಕೇರಿ ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರು ಬುಧವಾರ ಚಾಲನೆ ನೀಡಿದರು.
ಮಣ್ಣಿಕೇರಿ ಗ್ರಾಮದ ಜನತೆ ಬಹು ದಿನಗಳ ಹೋರಾಟದ ಫಲದಿಂದ ಸರ್ಕಾರಿ ಪ್ರೌಡಶಾಲೆ ನಿರ್ಮಾಣವಾಗಿದೆ. ಅಂಗನವಾಡಿ ಕೇಂದ್ರ ಅದ್ಬುತವಾಗಿ ನಿರ್ಮಾಣವಾಗಿದೆ ಎಂದು ಸಂತಸ ವ್ಯಕ್ತಪಡಿಸಿ ಅವರು, ಮಕ್ಕಳಿಗೆ ಕುಡಿಯುವ ನೀರಿನ ಜತೆ ಆಟದ ಮೈದಾನ ಸುಸಜ್ಜಿತವಾಗಿ ನಿರ್ಮಾಣವಾಗಲಿ ಎಂದು ಹೇಳಿದರು.
ಮಣ್ಣಿಕೇರಿ ಹಾಗೂ ಕೇದನೂರ ಗ್ರಾಮದ ವಿವಿಧ ಕಾಮಗಾರಿ: ಈ ವೇಳೆ ಮಣ್ಣಿಕೇರಿ ಗ್ರಾಮದಲ್ಲಿ 15 ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಅಂಗನವಾಡಿ ಕೇಂದ್ರವನ್ನು ಶಾಸಕ ಸತೀಶ ಜಾರಕಿಹೊಳಿ ಅವರು ಉದ್ಘಾಟಿಸಿದರು. ಮತ್ತು 25 ಲಕ್ಷ ರೂ. ಸಿಸಿ ರಸ್ತೆ ಕಾಮಗಾರಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಸತೀಶ ಜಾರಕಿಹೊಳಿ ಆಪ್ತ ಸಹಾಯಕ ಮಲಗೌಡ ಪಾಟೀಲ, ಮಣ್ಣಿಕೇರಿ ಗ್ರಾಪಂ ಅಧ್ಯಕ್ಷರು ಕಾಶವ್ವಾ ಕಲ್ಲಪ್ಪಾ ಹೊಸಮನಿ, ಉಪಾಧ್ಯಕ್ಷ ಸುಮನ್ ಸಿದ್ದರಾಯ ಬುಕ್ಯಾಳ, ಮಲ್ಲಪ್ಪಾ ದಡ್ಡಿಕರ್ , ಬಾಳು ಗುಡಾಜಿ, ಸಾವಿತ್ರಿ ಹಡಲಗಿ, ಪರಶುರಾಮ ಗುಂಡಗನಟ್ಟಿ, ಸವಿತಾ ಸಂಬಾಜಿ, ಜ್ಯೋತಿ ರಾಜಾಯಿ,ಲಕ್ಷ್ಮೀ ಬೆಳಗಾವಿ, ಗೌಡೆ ಬಿರ್ಜೆ,ಮದು ಸಂಭಾಜಿ, ಹಾಲಗೌಡ ಬುರಲೆ ಹಾಗೂ ಇತರರು ಇದ್ದರು./////