Belagavi News In Kannada | News Belgaum

ದೇಶದ 74ನೇ ಗಣರಾಜ್ಯೋತ್ಸವದ ದಿನದ ಅಂಗವಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ ಪೊಲೀಸರಿಗೆ ರಾಷ್ಟ್ರಪತಿ ಪದಕ ಘೋಷಣೆ

ಬೆಂಗಳೂರು: ದೇಶದ 74ನೇ ಗಣರಾಜ್ಯೋತ್ಸವದ ದಿನದ ಅಂಗವಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ ಪೊಲೀಸರಿಗೆ ರಾಷ್ಟ್ರಪತಿ ಪದಕ ಘೋಷಣೆ  ಮಾಡಲಾಗಿದೆ. ಗಣನೀಯ ಸೇವೆ ಸಲ್ಲಿಸಿದ 901 ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಈ ಪೈಕಿ ಕರ್ನಾಟಕ ಪೋಲೀಸ್ ಸಿಬ್ಬಂದಿಗೆ ಒಟ್ಟು 20 ಪ್ರಶಸ್ತಿ ಲಭಿಸಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಪಟ್ಟಿ ಪ್ರಕಟಿಸಿದೆ. ಗಣನೀಯ ಸೇವೆ ಸಲ್ಲಿಸಿದ ಕರ್ನಾಟಕ ಪೋಲೀಸ್ ಸಿಬ್ಬಂದಿಗೆ ಒಟ್ಟು 20 ಪ್ರಶಸ್ತಿ ಲಭಿಸಿದ್ದು, ಅದರಲ್ಲಿ 19 ಪ್ರಶಸ್ತಿ ವಿಶಿಷ್ಟ ಸೇವೆ ಮತ್ತು 1 ಗಣನೀಯ ಸೇವೆಗೆ ಪ್ರಶಸ್ತಿ, 8 ಇತರ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಪೊಲೀಸ್​ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಅತ್ಯುನ್ನತ ಗೌರವ ರಾಷ್ಟ್ರಪತಿ ಪದಕ ನೀಡಲಾಗುತ್ತದ್ದು, ಈ ಪದಕ ಎಡಿಜಿಪಿ ಶರತ್​ ಚಂದ್ರ ಅವರಿಗೂ ಸಿಕ್ಕಿದೆ. ಇವರು ಶಿಕ್ಷಕರ ನೇಮಕಾತಿ ಹಗರಣ ಪ್ರಕರಣ ಸೇರಿದಂತೆ ಸಾಕಷ್ಟು ಪ್ರಮುಖ ಪ್ರಕರಣಗಳನ್ನು ಭೇದಿಸುವಲ್ಲಿ ಇವರದ್ದು ಪ್ರಮುಖ ಪಾತ್ರವಿದೆ. ಹಾಗಾಗಿ ತಮ್ಮ ವೃತ್ತಿ ಜೀವನದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಕರ್ನಾಟಕದ ಎಡಿಜಿಪಿ ಶರತ್​ ಚಂದ್ರ ಅವರಿಗೆ ಈ ಬಾರಿಯ ಗಣರಾಜ್ಯೋತ್ಸವದಂದು ರಾಷ್ಟ್ರಪತಿ ಪದಕ ನೀಡಿ ಗೌರವಿಸಲಾಗುತ್ತಿದೆ.

ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾದ ಕರ್ನಾಟಕ ಪೋಲೀಸ್ ಸಿಬ್ಬಂದಿ ಹೆಸರು ಈ ಕೆಳಗಿನಂತಿವೆ.

ಕರ್ನಾಟಕದ ADGP ಶರತ್​ ಚಂದ್ರ
ಲಾಂಬೂರಾಂ, ಸಿಜಿ, ಹುಬ್ಬಳ್ಳಿ
ನಾಗರಾಜು- ಡಿಎಸ್‌ಪಿ, ಬೆಂಗಳೂರು
ಪದ್ಮರಾಜಯ್ಯ ವೀರೇಂದ್ರ ಕುಮಾರ್‌- ಡಿಎಸ್‌ಪಿ ಬೆಂಗಳೂರು
ಬೆದ್ರಾಜೆ ಪ್ರಮೋದ್ ಕುಮಾರ್- ಡಿಎಸ್‌ಪಿ ಬೆಂಗಳೂರು
ಸಿದ್ದಲಿಂಗಪ್ಪ ಆರ್‌ ಪಾಟೀಲ್‌- ಡಿಎಸ್‌ಪಿ ಬೆಂಗಳೂರು ಲೋಕಾಯುಕ್ತ
ಸಿವಿ ದೀಪಕ್‌- ಡಿಎಸ್‌ಪಿ ಬೆಂಗಳೂರು
ಹೆಚ್‌ ವಿಜಯ- ಡಿಎಸ್‌ಪಿ ಬೆಂಗಳಊರು
ಬಿ. ಶಿವಲಿಂಗೇಗೌಡ ಮಂಜುನಾಥ್, ಇನ್ಸ್‌ಪೆಕ್ಟರ್‌- ಬೆಂಗಳೂರು ಗ್ರಾಮಾಂತರ
ಗಣೇಶ್‌ ಜನಾರ್ಧನ ರಾವ್‌- ಇನ್ಸ್‌ಪೆಕ್ಟರ್‌- ಬೆಂಗಳೂರು
ಆರ್‌ಪಿ ಅನಿಲ್- ಸರ್ಕಲ್‌ ಇನ್ಸ್‌ಪೆಕ್ಟರ್‌- ಬೆಂಗಳೂರು
ಮನೋಜ್ ಹೊವಾಲೇ, ಇನ್ಸ್‌ಪೆಕ್ಟರ್‌- ಬೆಂಗಳೂರು
ಟಿಎ ನಾರಾಯಣ ರಾವ್‌- ಸ್ಪೆಷಲ್‌ ARSI, KSRP ಬೆಂಗಳೂರು
ವೆಂಕಟರಮಣಗೌಡ- ARSI, KSRP ಬೆಂಗಳೂರು
ಎಸ್ ಎಂ ಪಾಟೀಲ್‌- ARSI, KSRP ಬೆಂಗಳೂರು
ಕೆ. ಪ್ರಸನ್ನಕುಮಾರ್‌- Head Constable, ಬೆಂಗಳೂರು
ಪ್ರಭಾಕರ ಹೆಚ್‌- Head Constable, ಬೆಂಗಳೂರು
ಬಿಟಿ ವರದರಾಜ- ರಿಸರ್ವ ಪೊಲೀಸ್‌ Inspector- ಬೆಂಗಳೂರು
ಡಿ. ಸುಧಾ- WHC, SCRB, ಬೆಂಗಳೂರು
ಟಿಆರ್‌ ರವಿಕುಮಾರ್‌- CHC, City Control Room ಬೆಂಗಳೂರು