ಒಂದೇ ದಿನ 40 ಡಿವೈಎಸ್ಪಿ, 13 ಐಪಿಎಸ್ ವರ್ಗಾವಣೆ

ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತದೆ. ಈ ಹಿನ್ನೆಲೆ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಪ್ರಕ್ರಿಯೆ ಶುರುವಾಗಿದ್ದು, ಸಾರ್ವತ್ರಿಕ ಚುನಾವಣೆ ಸಂಬಂಧ 40 ಡಿವೈಎಸ್ಪಿಗಳ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ಹಾಗೂ ರಾಜ್ಯದ ಹಲವೆಡೆ ಕರ್ತವ್ಯ ನಿರ್ವಹಿಸುತ್ತಿದ್ದ ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ವರ್ಗಾವಣೆ ಆದ ಡಿವೈಎಸ್ಪಿಗಳ ವಿವರ ಈ ಕೆಳಗಿನಂತಿದೆ.
ಜೆಸಿ ನಗರ ಎಸಿಪಿ ಮನೋಜ್ ಕುಮಾರ್ ಡಿಜಿಪಿ ಕಚೇರಿಗೆ ವರ್ಗಾವಣೆ. ಸುಬ್ರಹ್ಮಣ್ಯಪುರ ಎಸಿಪಿ ಪವನ್ ಸಿಐಡಿಗೆ ವರ್ಗಾವಣೆ. ಕವಿತಾ ಎಸಿಪಿ, ಸಿಐಡಿಗೆ ವರ್ಗಾವಣೆ. ಸಿಸಿಬಿ ಎಸಿಪಿ ರೀನಾ ಸುವರ್ಣ ಸಿಐಡಿಗೆ ವರ್ಗಾವಣೆ. ಸಿಸಿಬಿಯಲ್ಲಿ ಸ್ಯಾಂಟ್ರೋ ರವಿ ಪತ್ನಿ ವಿರುದ್ಧದ ಸುಳ್ಳು ದರೋಡೆ ಪ್ರಕರಣದ ತನಿಖೆ ನಡೆಸಿದ್ದ ಹೆಚ್ ಎಸ್ ಧರ್ಮೇಂದ್ರ, ಎಸಿಪಿ ಮಂಗಳೂರು ಐಜಿಪಿ ಕಚೇರಿಗೆ ವರ್ಗಾವಣೆ. ಎಲೆಕ್ಟ್ರಾನಿಕ್ ಸಿಟಿ ಎಸಿಪಿಯಾಗಿ ರವಿಶಂಕರ್ ವರ್ಗಾವಣೆ. ಕಾರ್ತಿಕ್ ರೆಡ್ಡಿ- ರಾಮನಗರ ಪೊಲೀಸ್ ವರಿಷ್ಠಾಧಿಕಾರಿ, ವಿನಾಯಕ್ ಪಾಟೀಲ್-ಎಐಜಿಪಿ, ಬೆಂಗಳೂರು ಸಂತೋಷ್ ಬಾಬು-ಎಸ್ಪಿ, ಗುಪ್ತಚರ ಇಲಾಖೆ, ದೇವರಾಜ್-ಡಿಸಿಪಿ, ಬೆಂಗಳೂರು ಉತ್ತರ ವಿಭಾಗದ ಡಿಸಿಪಿ, ಸಿರಿಗೌರಿ -ಎಸ್ಪಿ, ಇಂಟರ್ನಲ್ ಸೆಕ್ಯೂರಿಟಿ ಡಿವಿಷನ್, ಟಿ.ಪಿ.ಶಿವಕುಮಾರ್ – ಎಸ್ಪಿ, ಕೆಪಿಟಿಸಿಎಲ್ ಹೆಚ್.ಶೇಖರ್ – ಡಿಸಿಪಿ, ಕಾನೂನು ಸುವ್ಯವಸ್ಥೆ, ಬೆಳಗಾವಿ ನಗರ, ಪದ್ಮಿನಿ ಸಾಹೋ – ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ, ಪ್ರದೀಪ್ ಗುಂಟಿ -ಎಸ್ಪಿ, ಕಾರಾಗೃಹ ಇಲಾಖೆ, ಎಂ.ಎಸ್.ಗೀತಾ – ಎಸ್ಪಿ, ಪೊಲೀಸ್ ತರಬೇತಿ ಶಾಲೆ, ಮೈಸೂರು ರಾಮರಾಜನ್- ಪೊಲೀಸ್ ವರಿಷ್ಠಾಧಿಕಾರಿ, ಕೊಡಗು ರವೀಂದ್ರ ಕಾಶಿನಾಥ್ – ಡಿಸಿಪಿ, ಕಮಾಂಡ್ ಸೆಂಟರ್, ಬೆಂಗಳೂರು ಎಂ.ಎ.ಅಯ್ಯಪ್ಪ – ಎಸ್ಪಿ, ಗುಪ್ತಚರ ಇಲಾಖೆ.//////