ವಿಭಾಗದ ಕೆಲವು ಸಾರಿಗೆಗಳ ತಾತ್ಕಾಲಿಕ ರದ್ದು

ಬೆಳಗಾವಿ, ಫೆ.24: ಫೆ.27 2023 ರಂದು ಬೆಳಗಾವಿ ನಗರಕ್ಕೆ ಪ್ರಧಾನ ಮಂತ್ರಿಗಳು, ಭೇಟಿ ನೀಡಲಿದ್ದು, ಸದರಿ ಕಾರ್ಯಕ್ರಮದ ಪ್ರಯುಕ್ತ ಬೆಳಗಾವಿ ವಿಭಾಗದಿಂದ ಒಟ್ಟು 350 ವಾಹನಗಳನ್ನು ಪೂರೈಸಬೇಕಾಗಿರುತ್ತದೆ, ಆದ್ದರಿಂದ ವಿಭಾಗದ ಬೆಳಗಾವಿ, ಬೈಲಹೊಂಗಲ, ರಾಮದುರ್ಗ & ಖಾನಾಪೂರ ಬಸ್ ನಿಲ್ದಾಣಗಳಿಂದ ಕಾರ್ಯಾಚರಣಿಯಾಗುವ ಮಾರ್ಗಗಳ ಕೆಲವು ಸಾರಿಗೆಗಳನ್ನು ಅನಿವಾರ್ಯ ಕಾರಣಗಳಿಂದ ಫೆ.27 ರಂದು ತಾತ್ಕಾಲಿಕವಾಗಿ ರದ್ದು ಪಡಿಸಲಾಗಿದೆ.
ರದ್ದು ಪಡಿಸಿದ ಮಾರ್ಗಗಳು :
ಬೆಳಗಾವಿಯಿಂದ- ಕೊಲ್ಲಾಪೂರ, ಹುಬ್ಬಳ್ಳಿ, ಧಾರವಾಡ, ಸನ್ನತಿ, ವಿಜಯಪೂರ, ಗುಡ್ಡಾಪುರ, ಬೀಡಿ, ತೋಲಗಿ, ನೇಸರಗಿ, (ದೇಶನೂರ) ಗೋಕಾಕ, ಹಿಡಕಲ್, ಪಾಶ್ಚಾಪೂರ, ಬೈಲಹೊಂಗಲ
ಸಿಬಿಟಿಯಿಂದ ನಗರ ಉಪನಗರ – ಅನಗೋಳ, ವಡಗಾವ ಮಜಗಾವ, ವಂಟಮೂರಿ, ಕಣಬರ್ಗಿ, ರಣಕುಂಡೆ, ಚಂದನ ಹೊಸರ, ಸುಳೆಭಾವಿ, ರಾಣಿಚೆನ್ನಮ್ಮ ವಿಶ್ವವಿದ್ಯಾಲಯ, ಹೊನಗಾ, ಯಳ್ಳೂರು, ಉಚಗಾವ. ಕಲ್ಲೆ ಹೋಳ, ಸುಳೇಬಾವಿ
ಬೈಲಹೊಂಗಲದಿಂದ – ಬೆಳಗಾವಿ, ಧಾರವಾಡ, ಯರಗಟ್ಟಿ, ಮುನವಳ್ಳಿ, ನೇಸರಗಿ, ಬೆನಕಟ್ಟಿ, ಇಟಗಿರೋಡ, ಕಿತ್ತೂರು, ಹೊಳಿನಾಗಲಾಪೂರ, ಪಟ್ಟಿಹಾಳ, ಸವಟಗಿ, ಅಂಬಡಗಟ್ಟಿ, ಏಳಪಟ್ಟಿ, ತುರಮರಿ
ರಾಮದುರ್ಗದಿಂದ– ಬೆಳಗಾವಿ, ಮೆಳ್ಳಿಕೇರಿ, ಹಿರೇಕೊಪ್ಪ, ಹೊಸೂರು, ಕೊಣ್ಣೂರು, ಮೂಲಂಗಿ, ಯಾದವಾಡ, ಅನವಾಲ, ಲಕ್ಕನಾಯಕನಕೊಪ್ಪ, ರೆಡ್ಡರತಿಮ್ಮಾಪೂರ, ಗೊಣಗನೂರು, ಗೊಡಚಿ, ಮುನವಳ್ಳಿ, ಯರಗಟ್ಟಿ, ಹುಲಕುಂದ, ಕುಳಗೇರಿ, ಕಮಕೇರಿ, ಕೆರೂರು
ಖಾನಾಪೂರದಿಂದ- ಬೆಳಗಾವಿ, ಇಟಗಿಕ್ರಾಸ್, ಬಿದರಬಾವಿ, ಚಿಕಲಾ, ಪಾರವಾಡ, ಘೋಡಗೇರಿ, ಚೀಡಿ, ಕಿತ್ತೂರು sಸದರಿ ಮಾರ್ಗಗಳಲ್ಲಿ ಹೆಚ್ಚಿನ ಪ್ರಮಾಣದ ವಾಹನಗಳು ಇರುವುದರಿಂದ ಕೆಲವೊಂದು ವಾಹನಗಳನ್ನು ರದ್ದುಪಡಿಸಲಾಗಿದೆ. ಬೆಳಗಾವಿ ವಿಭಾಗದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಾರ್ಗಗಳಿಗೆ ಕನಿಷ್ಠ ಮಟ್ಟದ ಸೇವೆಯನ್ನು ಒದಗಿಸಿ ಹಾಗೂ ಯಾವುದೇ ಮಾರ್ಗಗಳು ಸೇವಾ ರಹಿತವಾಗಿರದಂತೆ ಮತ್ತು ಪ್ರಯಾಣಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಆದ್ದರಿಂದ ಸಾರ್ವಜನಿಕ ಪ್ರಯಾಣಿಕರು ಸಾರಿಗೆ ಸಂಸ್ಥೆಯೊಂದಿಗೆ ಸಹಕರಿಸಿ ಲಭ್ಯವಿರುವ ಸಾರಿಗೆ ಸೌಲಭ್ಯವನ್ನು ಪಡೆದು ಪ್ರಯಾಣಿಸಬೇಕು ಎಂದು ವಾಕರಸಾಸಂಸ್ಥೆ ಬೆಳಗಾವಿ ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.