ಗೋವಾ ಮದ್ಯ ಸಾಗಾಟ ಮಾಡುತ್ತಿದ್ದ ಅಬಕಾರಿ ಅವರ ವಶಕ್ಕೆ

ಬೆಳಗಾವಿ: ಅಬಕಾರಿ ಜಂಟಿಆಯುಕ್ತರು ಮಂಗಳೂರು ವಿಭಾಗ ಮಂಗಳೂರು. ಹಾಗೂ ಜಗದೀಶ ಎನ್ ಕೆ ಅಬಕಾರಿ ಉಪ ಆಯುಕ್ತರು ಉತ್ತರ ಕನ್ನಡ ಜಿಲ್ಲೆ ಕಾರವಾರ ರವರ ನಿರ್ದೇಶನದ ಮೇರೆಗೆ ಹಾಗೂ ಶಂಕರಗೌಡ ಪಾಟೀಲ ಮಾನ್ಯ ಅಬಕಾರಿ ಉಪ ಅಧೀಕ್ಷಕರು ಯಲ್ಲಾಪುರ ಉಪವಿಭಾಗ ಯಲ್ಲಾಪುರ ರವರ ಮಾರ್ಗದರ್ಶನ ಮೇರೆಗೆ ದಿನಾಂಕ. 11/03/ 2023 ರಂದು ಬೆಳಗಿನಜಾವ4:30 ಗಂಟೆ ಸಮಯಕ್ಕೆ ಜೋಯಿಡಾ ತಾಲೂಕಿನ ಅನಮೋಡ ಗ್ರಾಮದ ಅಬಕಾರಿ ತನಿಖಾ ಠಾಣೆಯ ಮುಂಭಾಗದಲ್ಲಿ ಖಚಿತ ಮಾಹಿತಿ ಮೇರೆಗೆ ವಾಹನ ತಪಾಸಣಿ ಮಾಡುತ್ತಿದ್ದಾಗ ನೋಂದಣಿ ಸಂಖ್ಯೆ
KA40-B-0921 ದರಲ್ಲಿ 178.200 ಲೀಟರ್ ಗೋವಾ ಮದ್ಯ ಸಾಗಾಟ ಮಾಡುತ್ತಿದ್ದ ರಾಮಿರೆಡ್ಡಿ ಬಾಲಗಂಗಿರೆಡ್ಡಿ ತಂದೆ ರಾಮಿರೆಡ್ಡಿ ತಿರುಪಲ್ ರೆಡ್ಡಿ, ಗೊಟೋರ ಗ್ರಾಮ, ಕಡಪ ಜಿಲ್ಲೆ ಆಂದ್ರಪ್ರದೇಶ ಎಂಬುವನನ್ನು ದಸ್ತಗಿರಿ ಮಾಡಲಾಗಿದ್ದು ವಾಹನ ಮಾಲೀಕನನ್ನು ಪತ್ತೆ ಹಚ್ಚಬೇಕಾಗಿದೆ. ಅಬಕಾರಿ ದಾಳಿಯಲ್ಲಿ ಅಬಕಾರಿ ಉಪನಿರೀಕ್ಷಕ ರಾದ
ಶ್ರೀ ಶ್ರೀಕಾಂತ ಬಿ ಅಸೂದೆ
ಅಬಕಾರಿ ಪೇದೆಗಳಾದ
ಶ್ರೀ ಬಾಲಕೃಷ್ಣ ಕೆ
ಶ್ರೀ ಆರ್ ಎನ್ ನಾಯಕ
ಪಾಲ್ಗೊಂಡಿರುತ್ತಾರೆ. ಅಬಕಾರಿ ಸ್ವತ್ತು ಹಾಗೂ ವಾಹನದ ಅಂದಾಜು ಮೌಲ್ಯ 828600/- ಆಗಿರುತ್ತದೆಎಂದು ಅಂದಾಜಿಸಲಾಗಿದೆ. ತನಿಖೆಯನ್ನು ಮುಂದುವರಿಸಲಾಗಿದೆ.