ಮಾ.13 ರಿಂದ ಐದು ದಿನಗಳ ಮಸ್ತಕಾಭಿಷೇಕ ಮತ್ತು ಪಂಚಕಲ್ಯಾಣ ಮಹೋತ್ಸವ

ಬೆಳಗಾವಿ.ಮಾ.11: ಬೆಳಗಾವಿ ತಾಲೂಕಿನ ಮುತ್ನಾಳ ಗ್ರಾಮಕ್ಕೆ ಹೊಂದಿಕೊಂಡಿರುವ ಶ್ರೀ ಕ್ಷೇತ್ರ ಕಾಂಚನಶೃತಿ ವಿದ್ಯಾಸಂಸ್ಥೆ ಅಹಿಂಸಾ ಕ್ಷೇತ್ರದಲ್ಲಿ ನೂತನವಾಗಿ ಪ್ರತಿಷ್ಠಾಪಿಸಲಾದ ಭಗವಾನ ಬಾಹುಬಲಿ ಪ್ರತಿಮೆಗೆ ಮಹಾ ಮಸ್ತಕಾಭಿಷೇಕ ಮತ್ತು ಪಂಚಕಲ್ಯಾಣ ಮಹೋತ್ಸವ ಕಾರ್ಯಕ್ರಮಗಳು ಇದೇ ಮಾ.13 ರಿಂದ ಮಾ.17 ರವರೆಗೆ ನಡೆಯಲಿವೆ.
ಬೆಂಗಳೂರಿನ ಬಿ.ಎಸ್.ನೇಮೇಶ ಮತ್ತು ಅವರ ಪತ್ನಿ ಜಿ,.ಎನ್.ಮೀನ ಅವರ ಸುಪತ್ರಿ ಕುಮಾರಿ ನಿಶ್ಮಿತ ಬಿ.ಎನ್. ಅಕಾಲಿಕ ದೈವಾಧೀನರಾದ ಹಿನ್ನಲೆಯಲ್ಲಿ ಪುತ್ರಿಯ ಸ್ಮರಣೆಗಾಗಿ ಭಗವಾನ ಬಾಹುಬಲಿ ಪ್ರತಿಮೆಯನ್ನು ಬೆಳಗಾವಿ ತಾಲೂಕಿನ ಮುತ್ನಾಳ ಗ್ರಾಮದ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಲಾಗಿದೆ. ನೂತನವಾಗಿ ಪ್ರತಿಷ್ಠಾಪಿಸಲಾದ ಪ್ರತಿಮೆಯ ಮಹಾಮತ್ಸಕಾಭಿಷೇಕ ಮತ್ತು ಪಂಚಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸೋಮವಾರ ಮಾ.13 ರಂದು ಧ್ವಜಾರೋಹಣ, ಗರ್ಭಕಲ್ಯಾಣ, ಮಾ.14 ರಂದು ಜನ್ಮಕಲ್ಯಾಣ ರಾಜ್ಯಾಭಿಷೇಕ, ದೀಕ್ಷಾಕಲ್ಯಾಣ, ಮಾ.15 ರಂದು ಕೇವಲಜ್ಞಾನ ಮೋಕ್ಷಕಲ್ಯಾಣ, ಮಾ. 16 ಮತ್ತು 17 ರಂದು ಕಲ್ಪದ್ರುವ ಪೂಜೆ, ಮತ್ತು ಮಹಾಮಸ್ತಕಾಭಿಷೇಕ ಕಾರ್ಯಕ್ರಮಗಳು ನಡೆಯಲಿವೆ .
ಈ ಕಾರ್ಯಕ್ರಮಕ್ಕೆ ನಾಡಿನ ಅನೇಕ ಹಿರಿಯ ಸಮಾಜ ಮುಖಂಡರು ಶಾಸಕರಾದ ಅಭಯ ಪಾಟೀಲ, ಸತೀಶ ಜಾರಕಿಹೊಳಿ ಮಾಜಿ ಶಾಸಕ ಸಂಜಯ ಪಾಟೀಲ , ಸೇರಿದಂತೆ ಎಲ್ಲ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಹಿಂಸಾ ಕ್ಷೇತ್ರದ ಅಧಿಷ್ಠಾತಾ ಪಾರೀಶ ಹುಕ್ಕೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.