20ಕ್ಕೆ ಚುನಾವಣೆ ಸಂದೇಶ ಸಾರಲು ರಾಹುಲ್ ಗಾಂಧಿ ಬೆಳಗಾವಿಗೆ ಆಗಮನ: ವಿಪಕ್ಷ ನಾಯಕ ಸಿದ್ದರಾಮಯ್ಯ.
ಕನ್ನಡಿಗರ ಹಕ್ಕು ರಕ್ಷಣೆ ಮಾಡುವುದರಲ್ಲಿ ಸಿಎಂ ಬೊಮ್ಮಾಯಿ ವಿಫಲ-ಸಿಎಂ ಬೊಮ್ಮಾಯಿ ರಾಜೀನಾಮೆಗೆ, ಮಹಾ ಸರ್ಕಾರ ವಜಾಗೊಳಿಸಲು ಸಿದ್ದು ಆಗ್ರಹ

ಬೆಳಗಾವಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮಾ. 20ರಂದು ಬೆಳಗಾವಿಗೆ ಆಗಮಿಸಲಿದ್ದು, ಕಾಂಗ್ರೆಸ್ ನಾಯಕರೆಲ್ಲ ಸೇರಿ ಐತಿಹಾಸಿಕ ರ್ಯಾಲಿ ಮಾಡಲು ತೀರ್ಮಾನ ಮಾಡಿದ್ದೇವೆ. ರ್ಯಾಲಿಯಲ್ಲಿ 3ರಿಂದ 4 ಲಕ್ಷ ಜನ ಸೇರಲಿದ್ದು, ಇಡೀ ರಾಜ್ಯಕ್ಕೆ ಚುನಾವಣೆ ಸಂದೇಶ ನೀಡುವ ಪ್ರಯತ್ನ ರಾಹುಲ್ ಗಾಂಧಿಯವರು ಮಾಡಲಿದ್ದಾರೆ ಎಂದು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರು, ಟಿಕೆಟ್ ಆಕಾಂಕ್ಷಿಗಳ ಕುರಿತು ಮಾತನಾಡಲಿದ್ದಾರೆ. ಮಹಾರಾಷ್ಟ್ರ ಸರ್ಕಾರದವರು ಅನಗತ್ಯವಾಗಿ ಮೇಲಿಂದ ಮೇಲೆ ಕಾಲು ಕೆರೆಯುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಹಾಗೂ
ಇದೊಂದು ಷಡ್ಯಂತ್ರ. ಆರುವರೆ ಕೋಟಿ ಕನ್ನಡಿಗರ ಸ್ವಾಭಿಮಾನ ಕೆಣಕುವ ಕೆಲಸ ಆಗ್ತಿದೆ. ಮಹಾಜನ ಆಯೋಗ ವರದಿ ನೀಡಲಾಗಿದೆ. ವರದಿ ಕೊಟ್ಟ ಮೇಲೇಯೂ ಮಹಾ ಸರ್ಕಾರ ಕಾಲು ಕೆರೆದು ಜಗಳಕ್ಕೆ ನಿಲ್ತಿದೆ. ಒಂದು ಕಡೆ ಕನ್ನಡಿಗರ ಸ್ವಾಭಿಮಾನ ಕೆಣಕುವ ಕೆಲಸ ನಡಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಾರಾಷ್ಟ್ರ ಸರ್ಕಾರದಿಂದ ಕರ್ನಾಟಕಕ್ಕೆ ಸೇರಲು ಬಯಸುವ ಹಳ್ಳಿಗಳಿಗ 534 ಕೋಟಿ ರೂಗಳ ಅನುದಾನ ನೀಡಲಾಗಿದೆ. ಮಹಾರಾಷ್ಟರ ಬಿಜೆಪಿಯವರ ಈ ಪ್ರಯತ್ನವನ್ನು ನಾನು ಕಟುವಾಗಿ ಖಂಡಿಸ್ತೀನಿ ಎಂದ ಮಾಜಿ ಸಿಎಂ ಸಿದ್ದರಾಮಯ್ಯ. ನಾವು ಕನ್ನಡಿಗರು ಶಾಂತವಾಗಿದ್ದೇವೆ. ಅಂದ್ರೇ ವೀಕ್ ಆಗಿದ್ದೇವೆ ಎಂದರ್ಥ ಅಲ್ಲ. ನಮ್ಮ ನೆಲ, ಜಲ, ಭಾಷೆ ವಿಚಾರ ಬಂದ್ರೆ ನಾವೆಲ್ಲ ಕನ್ನಡಿಗರು. ಎಲ್ಲ ಕನ್ನಡಿಗರು ಕೂಡಾ ಯಾವುದೇ ಕಾರಣಕ್ಕೂ ಒಂದಿಂಚೂ ನೆಲವನ್ನು ಬಿಟ್ಟು ಕೊಡಲ್ಲ. ಮಹಾರಾಷ್ಟ್ರದ ಜತ್ತ ತಾಲೂಕಿನ ಕೆಲ ಹಳ್ಳಿಗಳು ಕರ್ನಾಟಕ್ಕೆ ಸೇರಲು ಬಯಸ್ತಿವೆ. ಅದರಲ್ಲಿ ನಾವು ಕನ್ನಡಿಗರು ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಕನ್ನಡಿಗರನ್ನು ರಕ್ಷಣೆ ಮಾಡುವುದರಲ್ಲಿ, ಕನ್ನಡಿಗರ ಹಕ್ಕು ರಕ್ಷಣೆ ಮಾಡುವುದರಲ್ಲಿ ಸಿಎಂ ಬೊಮ್ಮಾಯಿ ವಿಫಲರಾಗಿದ್ದಾರೆ.
ಕನ್ನಡಿಗರ ರಕ್ಷಣೆ ಮಾಡಲು ನಿಮ್ಮಿಂದ ಆಗದಿದ್ದಲ್ಲಿ ನೀವು ರಾಜೀನಾಮೆ ನೀಡಬೇಕು. ಮಹಾರಾಸ್ಟ್್ರ ಸರ್ಕಾರವನ್ನು ವಜಾಗೊಳಿಸಬೇಕು ಎಂದು ವಾಗ್ದಾಳಿ ನಡೆಸಿದರು.
ಒಕ್ಕೂಟದ ವ್ಯವಸ್ಥೆಗೆ ದಕ್ಕೆ ತರುವಂತಹ, ಅಶಾಂತಿ ನಿರ್ಮಾಣ ಮಾಡುತ್ತಿರುವ ಮಹಾ ಸರ್ಕಾರವನ್ನು ವಜಾಗೊಳಿಸಬೇಕು. ಇದನ್ನೆಲ್ಲ ನಿಯಂತ್ರಿಸಲು ಮುಖ್ಯಮಂತ್ರಿ ವಿಫಲವಾಗಿರೋದಕ್ಕೆ ರಾಜೀನಾಮೆ ನೀಡಬೇಕು. ಕರ್ನಾಟಕದ ವಿಷಯದಲ್ಲಿ ಕುತಂತ್ರ ಮಾಡುತ್ತಿರುವ ಮಹಾರಾಷ್ಟ್ರ ಸರ್ಕಾರ ವಜಾಗೊಳಿಸಬೇಕು.
ಇದೆಲ್ಲವೂ ಕೇಂದ್ರ ಸರ್ಕಾರದಿಂದ ಸಾಧ್ಯವಿದೆ ಎಂದರು.
ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾತನಾಡಿ, ಬೆಳಗಾವಿಯ ಐತಿಹಾಸಿಕ ನೆಲದಲ್ಲಿ ಕಾಂಗ್ರೆಸ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಎಐಸಿಸಿ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ನಾಯಕರು ಭಾಗಿಯಾಗಲಿದ್ದಾರೆ. ಕರ್ನಾಟಕದ ವಿದ್ಯಾವಂತರನ್ನು ಬಿಜೆಪಿ ಸರ್ಕಾರ ಮೋಸ ಮಾಡ್ತೀದೆ. ಕರ್ನಾಟಕ ಯುವ ಸಮೂದಾಯಕ್ಕೆ ಒಳಿತಾಯುವ ಗ್ಯಾರಂಟಿ ಕಾರ್ಡ್ನ್ನು ಅನಾವರಣಗೊಳಿಲಿದ್ದಾರೆ. ಯುವ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಈ ಗ್ಯಾರಂಟಿ ಕಾರ್ಡ್ ಆಯೋಜಿಸಲಾಗಿದೆ. ‘ಯುವ ಕ್ರಾಂತಿ’ ಎಂಬ ಹೆಸರಿನಲ್ಲಿ ಗ್ಯಾರಂಟಿ ಕಾರ್ಡ್ ಅನಾವರಣಗೊಳ್ಳಲಿದೆ ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಪ್ರಮುಖ ಮೂರು ವಿಚಾರಕ್ಕಾಗಿ ಈ ಪತ್ರಿಕಾಗೋ಼ಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಬಳಿಕ ಮೊದಲನೆಯ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಮಹಾತ್ಮ ಗಾಂಧಿಯವರು ಕಾಂಗ್ರೆಸ್ ಸಮಾವೇಶಕ್ಕೆ ನಡೆಸಿದ ನಾಡಿನಿಂದ ಈ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಎರಡನೇಯ ವಿಚಾರ ಕರ್ನಾಟಕದ ಸ್ವಾಭಿಮಾನದ ಪ್ರಶ್ನೆ ಆಗಿದೆ. ನಮ್ಮ ನೆಲ,ಭಾಷೆ, ಗಡಿಗಳ ವಿಚಾರ. ಈ ದೇಶದಲ್ಲಿ ಭಾಷೆಗಳ ಕುರಿತಂತೆ ಯಾವುದೇ ತಕರಾರು ಇಲ್ಲ. ವಿಶೇಷವಾಗಿ ಬೆಳಗಾವಿ ಭಾಗದಲ್ಲಿ ಸುರ್ವಣ ಸೌಧ ನಿರ್ಮಿಸಿ, ಭಾಷೆ ವಿಚಾರವಾಗಿ ಗಟ್ಟಿಯಾಗಿ ನಿಂತಿದೆ. ಮಹಾದಲ್ಲಿ ಬಿಜೆಪಿ ಇದೆ, ಕರ್ನಾಟಕದಲ್ಲಿಯೂ ಬಿಜೆಪಿ ಸರ್ಕಾರ ಇದೆ. ಎಲ್ಲ ಕನ್ನಡಿಗರ ಶಾಂತಿ ನೆಮ್ಮದಿಯನ್ನು ಕೆಡಿಸುವ ಕೆಲಸ ಬಿಜೆಪಿ ಮಾಡ್ತಿದೆ ಎಂದು ದೂರಿದರು.
ಕಾಂಗ್ರೆಸ್ ಪಕ್ಷ ಐಕ್ಯತೆ ಮೂಡಿಸಲು ಪ್ರಯತ್ನಿಸುತ್ತದೆ. ಮಹಾ ಸರ್ಕಾರ ಕರ್ನಾಟಕಕ್ಕೆ ಸೇರಿದ್ದ 800ಕ್ಕೂ ಅಧಿಕ ಹಳ್ಳಿಗಳಿಗೆ ಸಹಾಯ ಮಾಡಲು ಮುಂದಾಗಿದೆ. ಇದು ಚುನಾವಣೆಯ ಗಿಮಿಕ್ ಅಷ್ಟೇ. ಸಿಎಂಗೆ ಹೇಳೋದು ಇಷ್ಟೇ. ನಮ್ಮ ರಾಜ್ಯದ ಸ್ವಾಭಿಮಾನವನ್ನು ಅಡವಿಟ್ಟಿದೀರಿ. ಕರ್ನಾಟಕ ರಾಜ್ಯದಲ್ಲಿ ಯಾರು ಬೇಕಾದರೂ ಬಂದು ಆಡಳಿತ ಮಾಡುವಂತಾಗಿದೆ. 356 ಆರ್ಟಿಕಲ್ ಪ್ರಕಾರ ಮಹಾ ರಾಜ್ಯ ಸರ್ಕಾರನ್ನು ವಜಾ ಮಾಡಬೇಕು. ಬೇರೆ ರಾಜ್ಯದವರು ನಮ್ಮ ರಾಜ್ಯದಲ್ಲಿ ಬಂದು ಹಸ್ತಕ್ಷೇಪ ಮಾಡ್ತಿದ್ದಾರೆ. ಇದು ಖಂಡನೀಯ. ಕೇಂದ್ರ ಸರ್ಕಾರ ಮದ್ಯಸ್ಥಿಕೆ ವಹಿಸಿಬೇಕು. ಮಹಾರಾಷ್ಟ್ರ ಹಾಗೂ ಕರ್ನಾಟಕ ಸರ್ಕಾರವನ್ನು ವಜಾಗೊಳಿಸಬೇಕು ಎಂದು. ಬೆಳಗಾವಿಯಲ್ಲಿ ಹೇಳಿದರು
ಮೂರನೇ ವಿಚಾರ ಬಿಜೆಪಿ ನಾಯಕ ಮೋಹನ ನಿಂಬೇಕಾಯಿ ಈ ಹಿಂದೆ ಅವರು ಬಿಜೆಪಿಯಲ್ಲಿ ಉನ್ನತ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಸದ್ಯ ಯಾವ ಷರತ್ತು ಇಲ್ಲದೇ, ಬಿಜೆಪಿ ಭ್ರಷ್ಟಾಚಾರಕ್ಕೆ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಕಾಂಗ್ರೆಸ್ ಪಕ್ಷದ ಸಿದ್ದಾಂತಗಳನ್ನು ಒಪ್ಪಿಕೊಂಡು ಕಾಂಗ್ರೆಸ್ ಸೇರಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಮೋಹನ್ ನಿಂಬಿಕಾಯಿ ಕಾಂಗ್ರೆಸ್ ಸೇರ್ಪಡೆಯಾಗಿ ಮಾತನಾಡಿ, ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷ ಸೇರಿದ್ದೇನೆ. ಕಳೆದ ಕೆಲ ವರ್ಷಗಳಿಂದ ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಆದ್ರೆ ಬಿಜೆಪಿ ನನ್ನನ್ನು ಸರಿಯಾಗಿ ನಡೆಸಿಕೊಳ್ಳುವಲ್ಲಿ ಯಡವಿದೆ. ಈ ಹಿಂದೆ ಯಡಿಯೂರಪ್ಪನವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದೆ. ಬಿಜೆಪಿಯ ಕೆಲ ಸಿದ್ದಾಂತಗಳು ಹಾಗೂ ಕೆಲ ಬಿಜೆಪಿ ಮುಖಂಡರಿಂದ ನನಗೆ ನೋವಾಗಿದೆ. ಹೀಗಾಗಿ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ಕಾಂಗ್ರೆಸ್ ಪಕ್ಷ ಯಾವುದೇ ಜವಾಬ್ದಾರಿ ನೀಡಿದರು ಸರಿಯಾಗಿ ನಿಭಾಯಿಸುತ್ತೆನೆ ಎಂದ ತಿಳಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಸಲೀಂ ಅಹ್ಮದ್ ಖಾನ್, ರಾಷ್ಟ್ರೀಯ ಯುತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ರಾಜ್ಯ ಯುತ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ನಲಪಾಡ್, ಮಾಜಿ ಕೇಂದ್ರ ಕೆ.ಎಚ್.ಮುನಿಯಪ್ಪ, ವಿಧಾನ ಪರಿಷತ್ ಸದಸ್ಯರಾದ ನಾರಾಯಣ ಸ್ವಾಮಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಮಾಜಿ ಸಚಿವ ವಿನಯ ಕುಲಕರ್ಣಿ ಸೇರಿದಂತೆ ಅನೇಕ ರಾಜ್ಯ ಮುಖಂಡರು ಇದಕ್ಕೂ ಮೊದಲು ಕಾರ್ಯಕರ್ತರ ಮುಖಂಡರುಗಳ ಸಭೆ ನಡೆಯಿತು ಸಭೆಯಲ್ಲಿ ಪ್ರಮುಖ ಕಾಂಗ್ರೆಸ್ ಮುಖಂಡರುಗಳು ಇದ್ದರು.