ಜೋಕಾನಟ್ಟಿ ಗ್ರಾಮದಲ್ಲಿ ಜಾನಪದ ಸಾಂಸ್ಕøತಿಕ ಕಲಾ ಉತ್ಸವ

ಗೋಕಾಕಃ- ಮೂಡಲಗಿ ತಾಲೂಕಿನ ಫುಲಗಡ್ಡಿ ಗ್ರಾಮದಲ್ಲಿ ದಿನಾಂಕಃ 26-03-2023 ರಂದು ಜಾನಪದ ಸಾಂಸ್ಕøತಿಕ ಕಲಾ ಉತ್ಸವವನ್ನು ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ, ಬೆಂಗಳೂರು ಹಾಗೂ ಶ್ರೀ ಸಿದ್ಧಾರೂಢ ಮಹಿಳಾ ಕಲಾ ಸಂಘ, ಜೋಕಾನಟ್ಟಿ ಸಂಯುಕ್ತ ಆಶ್ರಯದಲ್ಲಿ ಯಶಸ್ವಿಯಾಗಿ ಜಾನಪದ ಕಾರ್ಯಕ್ರಮ ನೇರವೇರಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಬೆಳಿಗ್ಗೆ 11 ಗಂಟೆಗೆ ಮೆರವಣಿಗೆ ಕಾರ್ಯಕ್ರಮ ನಡೆಸಲಾಯಿತು. ನಂತರ ವೇದಿಕೆ ಕಾರ್ಯಕ್ರಮ ಪ್ರಾರಂಭಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಮತಿ ಅಭಿನವ ಸಂಗಮನಾಥ ಸ್ವಾಮಿ, ಶ್ರೀ ಚಿದಾನಂದ ಸ್ವಾಮಿಜಿ, ಗುರು ವೀರಭದ್ರಸ್ವಾಮಿ ಸ್ವಾಮೀಜಿಗಳು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಮಹಾಂತೇಶ ಟಿ. ಪಾಟೀಲ, ವಕೀಲರು ಮಾಡಿದರು. ಇವರು ಮಾತನಾಡಿ ಜಾನಪದ ಸಂಸ್ಕøತಿಯೂ ಭಾರತ ಮೂಲ ಸಂಸ್ಕøತಿಯಾಗಿದೆ.
ಇದನ್ನು ಉಳಿಸಿ ಬೆಳೆಸುವಲ್ಲಿ ಇಂತಹ ಸಂಘ-ಸಂಸ್ಥೆಗಳ ಪಾತ್ರ ಬಹುಮುಖ್ಯವಾಗಿದೆ. ಆದ್ದರಿಂದ ಮೇಲಿಂದ ಮೇಲೆ ಇಂತಹ ಜಾನಪದ ಕಾರ್ಯಕ್ರಮಗಳು ನೇರವೇರಬೇಕಿದೆ ಎಂದರು. ಅದರಂತೆ ಉಪನ್ಯಾಸಕರಾದ ಶ್ರೀ ಪ್ರಕಾಶ ಕೋಟಿನತೋಟ, ಸಾಹಿತ್ಯ ಚಿಂತಕರು, ಇವರು ಮಾತನಾಡಿ ಸಾವಯವ ಕೃಷಿ ಬಗ್ಗೆ ಮಾತನಾಡುತ್ತ ಜಾನಪದ ಕೃಷಿ ಬಗ್ಗೆ ತಿಳಿಸಿದರು. ಮೊದಲಿನ ಸಾವಯವ ಕೃಷಿ ಪದ್ಧತಿಯನ್ನು ಬಳಸಿ ಸಾವಯವ ಬೆಳೆಗಳನ್ನು ಬೆಳೆಯಬೇಕೆಂದು ಹೇಳಿದರು.
ಇನ್ನೋರ್ವ ಅತಿಥಿಯಾದ ಡಾ. ಅರುಣ ಸವತಿಕಾಯಿ ಸಾಹಿತ್ಯ ಚಿಂತಕರು ಮಾತನಾಡಿ ಭಾರತದಲ್ಲಿ ಜಾನಪದ ಕಲಾ ಸಂಸ್ಕøತಿಯೂ ಅತಿ ಪುರಾಣತವಾಗಿದ್ದು, ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗುತ್ತಿದೆ. ಆದ್ದರಿಂದ ಇಂತಹ ಕಾರ್ಯಕ್ರಮಗಳನ್ನು ನಾವೆಲ್ಲರೂ ಕೂಡಿಕೊಂಡು ಯಶಸ್ವಿಯಾಗಿ ನೇರವೇರಿಸಬೇಕೆಂದು ಹೇಳಿದರು.
ಅದರಂತೆ ಶ್ರೀಮತಿ ವಿಧ್ಯಾ ರೆಡ್ಡಿ, ಸಾಹಿತಿಗಳು ಇವರು, ಮಾತನಾಡಿ ಇತ್ತಿಚೀನ ದಿನಗಳಲ್ಲಿ ಮೊಬೈಲ, ಕಂಪ್ಯೂಟರ, ಹಾಗೂ ಟಿವಿ ಬಳಕೆಯಿಂದ ಹಲವಾರು ಜಾನಪದ ಕಲೆಗಳು ನಶಿಸಿ ಹೋಗುತ್ತಿವೆ. ಆದ್ದರಿಂದ ನಾವು ಇವುಗಳ ಬಳಕೆಯನ್ನು ಕಡಿಮೆ ಮಾಡಿ ಜಾನಪದ ಸಂಸ್ಕøತಿಯನ್ನು ಬೆಳೆಸಬೇಕೆಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಈಶ್ವರಚಂದ್ರ ಎಸ್. ಬೇಟಗೇರಿ, ಡಾ. ಲಕ್ಷ್ಮಣ ಚೌರಿ, ಶ್ರೀಮತಿ ಸುನಂದಾ ಪೂಜೇರಿ, ಶ್ರೀ ಪ್ರದೀಪ ಇಂಡಿ, ಶ್ರೀ ಬಸವರಾಜ ಕಡಖಭಾವಿ, ಇವರು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಕು. ಭಾರತಿ ಜೋಕಾನಟ್ಟಿ ಇವರು ಹಾಗೂ ವಂದಣಾರ್ಪಣೆಯನ್ನು ಕು. ಸರಸ್ವತಿ ಮಾದರ ಮಾಡಿದರು.
ಈ ಕಾರ್ಯಕ್ರಮದಲ್ಲಿ ಜಾನಪದ ನೃತ್ಯ, ಜಾನಪದ ಸಂಗೀತ, ಜಗ್ಗಲಗಿ ಕುಣಿ, ಲಂಬಾಣಿ ಭಜನೆ, ಭಜನಾ ಪದಗಳು, ಗೀಗೀ ಪದಗಳು, ಸಂಪ್ರದಾಯ ಪದಗಳು, ಕೋಲಾಟ, ಜಾನಪದ ಸಂಗೀತ, ಸೋಬಾನ ಪದ, ಬಿಸುವಕಲ್ಲಿನ ಪದ, ಡೊಳ್ಳಿನ ಪದ, ಶಾವರಕಿ ಪದ, ಸಣ್ಣಾಟ ಪದ, ಹಲಗೆ ಮೇಲ, ಸಂಗ್ಯಾ ಬಾಳ್ಯಾ ಸಣ್ಣಾಟ, ಕರಡಿ ಮಜಲು, ಕೋಲಾಟ, ದಟ್ಟಿ ಕುಣಿತ, ತಾಸೇವಾದನ, ದೊಡ್ಡಾಟ ಪದಗಳು ಪ್ರದರ್ಶನಗೊಂಡವು.