Belagavi News In Kannada | News Belgaum

ಉತ್ತರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ನಮ್ಮ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಆಸೀಪ್ (ರಾಜು) ಸೇಠ್ ಅವರು   ಉಮೇದುವಾರಿಕೆ ಸಲ್ಲಿಸಿದರು

ಬೆಳಗಾವಿ: ಬೆಳಗಾವಿ ಉತ್ತರ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ನಮ್ಮ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಆಸೀಪ್ (ರಾಜು) ಸೇಠ್ ಅವರು   ಉಮೇದುವಾರಿಕೆ ಸಲ್ಲಿಸಿದರು.

 

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಸೀಪ್ (ರಾಜು) ಸೇಠ್ ಅವರು ಇಂದು ಬೆಳಗಾವಿ ಮಹಾನಗರ ಪಾಲಿಕೆಗೆ ನೂರಾರು ಕಾರ್ಯಕರ್ತರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ರಾಜು ಸೇಠ ಅವರಿಗೆ ನಾಮಪತ್ರ ಸಲ್ಲಿಸಲು  ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ,  ಮಾಜಿ ಶಾಸಕ ಪೀರೋಜ ಸೇಠ   ಅವರು ಸಾಥ್‌  ನೀಡಿದರು.

ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ,  ಮಾಜಿ ಶಾಸಕ ಪೀರೋಜ ಸೇಠ ,  ಎಐಸಿಸಿ ವೀಕ್ಷಕ್‌ ವಿಶ್ವನಾಥನ್‌ ಇತರರು ಹಾಗು ನೂರಾರು ಕಾಂಗ್ರೆಸ್‌ ಕಾರ್ಯಕರ್ತರು ಇದ್ದರು.