Belagavi News In Kannada | News Belgaum

ಉಸ್ತುವಾರಿ ಸಚಿವರ ಪಟ್ಟಿ ರಿಲೀಸ್‌; ಬೆಂಗಳೂರಿಗೆ ಡಿಕೆಶಿ, ಬೆಳಗಾವಿಗೆ ಸತೀಶ್‌ ಜಾರಕಿಹೊಳಿ, ಉಡುಪಿ ಜಿಲ್ಲಾ ಉಸ್ತುವಾರಿಯಾಗಿ ಲಕ್ಷ್ಮಿ ಹೆಬ್ಬಾಳ್ಕರ್‌ ನೇಮಕ

ಬೆಂಗಳೂರು: ವಿವಿಧ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗಿದ್ದು, ಬೆಂಗಳೂರು ನಗರಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಬೆಳಗಾವಿಗೆ ಸಚಿವ ಸತೀಶ್‌ ಜಾರಕಿಹೊಳಿ, ಉಡುಪಿ ಜಿಲ್ಲೆಯ ಉಸ್ತುವಾರಿಯನ್ನು ಸಚಿವೆ  ಲಕ್ಷ್ಮಿ ಹೆಬ್ಬಾಳ್ಕರ್‌ ವಹಿಸಿಕೊಂಡಿದ್ದು, ಸಚಿವ ಸತೀಶ್‌ ಜಾರಕಿಹೊಳಿ ಅವರು ಮೂರನೇ ಬಾರಿಗೆ ಉಸ್ತುವಾರಿ ಸಚಿವರಾಗಿ ನೇಮಕವಾಗಿದ್ದಾರೆ. 

* ಯಾವ ಜಿಲ್ಲೆಗೆ ಯಾರು ಉಸ್ತುವಾರಿ?

1) ಡಿ.ಕೆ.ಶಿವಕುಮಾರ್‌ – ಬೆಂಗಳೂರು ನಗರ
2) ಡಾ. ಜಿ.ಪರಮೇಶ್ವರ – ತುಮಕೂರು
3) ಹೆಚ್‌.ಕೆ.ಪಾಟೀಲ – ಗದಗ
4) ಕೆ.ಹೆಚ್‌.ಮುನಿಯಪ್ಪ – ಬೆಂಗಳೂರು ಗ್ರಾಮಾಂತರ
5) ರಾಮಲಿಂಗಾ ರೆಡ್ಡಿ – ರಾಮನಗರ
6) ಕೆ.ಜೆ.ಜಾರ್ಜ್‌ – ಚಿಕ್ಕಮಗಳೂರು
7) ಎಂ.ಬಿ.ಪಾಟೀಲ – ವಿಜಯಪುರ
8) ದಿನೇಶ್‌ ಗುಂಡೂರಾವ್‌ – ದಕ್ಷಿಣ ಕನ್ನಡ
9) ಹೆಚ್‌.ಸಿ.ಮಹಾದೇವಪ್ಪ – ಮೈಸೂರು
10) ಸತೀಶ್‌ ಜಾರಕಿಹೊಳಿ – ಬೆಳಗಾವಿ
11) ಪ್ರಿಯಾಂಕ್‌ ಖರ್ಗೆ – ಕಲಬುರಗಿ
12) ಶಿವಾನಂದ ಪಾಟೀಲ – ಹಾವೇರಿ
13) ಜಮೀರ್‌ ಅಹ್ಮದ್‌ – ವಿಜಯನಗರ
14) ಶರಣ ಬಸಪ್ಪ ದರ್ಶನಾಪುರ್‌ – ಯಾದಗಿರಿ
15) ಈಶ್ವರ್‌ ಖಂಡ್ರೆ – ಬೀದರ್‌
16) ಎನ್.ಚಲುವರಾಯಸ್ವಾಮಿ – ಮಂಡ್ಯ
17) ಎಸ್.ಎಸ್‌.ಮಲ್ಲಿಕಾರ್ಜುನ – ದಾವಣಗೆರೆ
18) ಸಂತೋಷ್‌ ಲಾಡ್‌ – ಧಾರವಾಡ
19) ಶರಣ ಪ್ರಕಾಶ್‌ ಪಾಟೀಲ್‌ – ರಾಯಚೂರು
20) ಆರ್‌.ಬಿ.ತಿಮ್ಮಾಪೂರ – ಬಾಗಲಕೋಟೆ
21) ಕೆ.ವೆಂಕಟೇಶ್‌ – ಚಾಮರಾಜನಗರ
22) ತಂಗಡಗಿ ಶಿವರಾಜ್‌ ಸಂಗಪ್ಪ – ಕೊಪ್ಪಳ
23) ಡಿ.ಸುಧಾಕರ್‌ – ಚಿತ್ರದುರ್ಗ
24) ಬಿ.ನಾಗೇಂದ್ರ – ಬಳ್ಳಾರಿ
25) ಕೆ.ಎನ್.ರಾಜಣ್ಣ – ಹಾಸನ
26) ಬಿ.ಎಸ್‌.ಸುರೇಶ್‌ – ಕೋಲಾರ
27) ಲಕ್ಷ್ಮಿ ಹೆಬ್ಬಾಳ್ಕರ್‌ – ಉಡುಪಿ
28) ಮಂಕಾಳ್‌ ವೈದ್ಯ – ಉತ್ತರ ಕನ್ನಡ
29) ಮಧು ಬಂಗಾರಪ್ಪ – ಶಿವಮೊಗ್ಗ
30) ಡಾ. ಎಂ.ಸಿ.ಸುಧಾಕರ್‌ – ಚಿಕ್ಕಬಳ್ಳಾಪುರ
31) ಎನ್.ಎಸ್‌.ಭೋಸರಾಜು – ಕೊಡಗು