Belagavi News In Kannada | News Belgaum

“ಸಾಂಬ್ರಾದ ಭಾರತಿಯ ವಾಯುದಳದ, ಏರ್ಮನ್ ಟ್ರೈನಿಂಗ್ ಸ್ಕೂಲ್ ಪ್ರಶಿಕ್ಷಣಾರ್ಥಿಗಳ ಶೈಕ್ಷಣಿಕ ಭೇಟಿ:

ಕೇಂದ್ರ ಗ್ರಂಥಾಲಯಕ್ಕೆ ವಾಯುದಳ ಅಧಿಕಾರಿ,ಪ್ರಶಿಕ್ಷಣಾರ್ಥಿಗಳ ಭೇಟಿ

ಬೆಳಗಾವಿ:ಸಾಂಬ್ರಾದ ಭಾರತಿಯ ವಾಯುದಳದ, ಏರ್ಮನ್ ಟ್ರೈನಿಂಗ್ ಸ್ಕೂಲ್ ನಲ್ಲಿಯ ಅಧಿಕಾರಿಗಳು, ಮಾನ್ಯ, ಜೇ ಡಬ್ಲ್ಯೂ ಓ- ರಾಕೇಶ್ ಗಜರಾಜ, ಎಸ್ ಅಭಿಷೇಕ್ ಬಚ್ಚನ್, ಮತ್ತು ಸಾರ್ಜೆಂಟ್ ಆಶಿಷ್ ಥಪಲಿಯಾಲ ಸೇರಿದಂತೆ,ಮತ್ತು 29 ಭಾರತೀಯ ಮತ್ತು 4 ವಿದೇಶಿ (ಶ್ರೀಲಂಕಾದ) ಪ್ರಶಿಕ್ಷಣಾರ್ಥಿಗಳನ್ನ ಒಳಗೊಂಡ ತಂಡ, ನಗರದ ಕೇಂದ್ರ ಗ್ರಂಥಾಲಯಕ್ಕೆ ಶೈಕ್ಷಣಿಕ ಭೇಟಿ ನೀಡಿದರು.ಜೊತೆಗೆ ಶಹಾಪುರ ಇ.ಗ್ರಂಥಾಲಯಕ್ಕೆಭೇಟಿ ನೀಡಿದರು.ಅವರ ತರಬೇತಿಯ ಭಾಗವಾಗಿ ಗ್ರಂಥಾಲಯ ನಿರ್ವಹಣೆ ಮತ್ತು ಸೇವೆಗಳು ಮತ್ತು ಕಾರ್ಯ ನಿರ್ವಹನೆ ಕುರಿತು ವಿಷಯಗಳು ಇರುತ್ತವೆ.ಅದರಲ್ಲೂ ಸಾರ್ವಜನಿಕ ಗ್ರಂಥಾಲಯಗಳ ಬಗ್ಗೆ ಅಭ್ಯಾಸವಿರುತ್ತದೆ.
ಉಪನಿರ್ದೇಶಕರಾದ ಶ್ರೀ ರಾಮಯ್ಶಾ ಅವರು ಮಾತನಾಡುತ್ತಾ ಗ್ರಂಥಾಲಯ ಕಾಯಿದೆ, ಬಜೆಟ್,ಆಡಳಿತಾತ್ಮಕ ವಿಷಯಗಳು,ಪುಸ್ತಕ ಖರೀದಿ ಮುಂತಾದ ವಿಷಯಗಳ ಕುರಿತು ಮಾಹಿತಿ ನೀಡಿದರು.ಜೊತೆಗೆ ಅವರ ರಾಷ್ಟ್ರಸೇವೆಗೆ ಇಲಾಖೆಯ ಪರವಾಗಿ ಧನ್ಯವಾದ ಅರ್ಪಿಸಿದರು.
ಸಿಬ್ಬಂದಿಗಳಾದ ಪ್ರಕಾಶ ಇಚಲಕರಂಜಿ , ಆಂಬೇಕರ್ ಅವರು ಗ್ರಂಥಾಲಯದ ವಿವಿಧ ವಿಭಾಗಗಳ ಕಾರ್ಯನಿರ್ವಹಣೆ, ಪುಸ್ತಕ ಸಂಗ್ರಹ,ತಾಂತ್ರಿಕ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.ಜೊತೆಗೆ ಕೆಡಿಪಿಏಲ್ , ಕರ್ನಾಟಕ ಡಿಜಿಟಲ್ ಸಾರ್ವಜನಿಕ ಗ್ರಂಥಾಲಯ ಬಗ್ಗೆ ಮಾಹಿತಿ ನೀಡಿ, ಸ್ಥಳದಲ್ಲಿಯೇ ನೋಂದಣಿ ಮಾಡಿಸಲಾಯಿತು.ಅಂತರ್ಜಾಲ ವಿಭಾಗ, ನಿಯತಕಾಲಿಕೆಗಳು, ದಿನಪತ್ರಿಕೆ,ಮಕ್ಕಳ ವಿಭಾಗದ ಸಂಗ್ರಹದ ಬಗ್ಗೆ ಮಾಹಿತಿಯನ್ನು ಸರಸ್ವತಿ, ಲಕ್ಷ್ಮಿ, ವಿಜಯಲಕ್ಷ್ಮಿ ಮತ್ತು ಅಕ್ಷತಾ ನೀಡಿದರು.
ಗ್ರಂಥಾಲಯ ನಿರ್ವಹಣೆ ಮತ್ತು ಸೇವೆಗಳ ಬಗ್ಗೆ ಪ್ರಶಿಕ್ಷಣಾರ್ಥಿಗಳು ಖುಷಿ ವ್ಯಕ್ತಪಡಿಸಿ, ಅವಶ್ಯಕ ಮಾಹಿತಿಯನ್ನು ಕೇಳಿ ತಿಳಿದುಕೊಂಡರು. ಪ್ರತಿ ವರ್ಷ ಈ ಟ್ರೈನಿಂಗ್ ಸ್ಕೂಲ್ ಪ್ರಶಿಕ್ಷಣಾರ್ಥಿಗಳು ಗ್ರಂಥಾಲಯಕ್ಕೆ ಶೈಕ್ಷಣಿಕ ಭೇಟಿ ನೀಡುವ ಮೂಲಕ ತಮ್ಮ ಜ್ಞಾನಭಿವೃದ್ದಿ ಮಾಡಿಕೊಳ್ಳುತ್ತಾರೆ.
ಈ ಸಂಧರ್ಭದಲ್ಲಿ ಅಧೀಕ್ಷಕರಾದ ಕಾಂಬಳೆ, ಸುಮಿತ್ ಕಾವಳೆ, ಅನಂದ ಮುತ್ತಗಿ, ಸಂಗೀತಾ,ಸುನೀಲ, ದ್ರಾಕ್ಷ್ಯಾಯಿನಿ, ಮತ್ತಿತರು ಉಪಸ್ಥಿತರಿದ್ದರು.