Belagavi News In Kannada | News Belgaum

Liquor Price: ಗುಂಡೈಕ್ಳ ನೋವಿಗೆ ಮದ್ದರೆಯಲು ಮುಂದಾದ ಅಬಕಾರಿ ಇಲಾಖೆ; ಬಾರ್ ಮಾಲೀಕರೇ ಹುಷಾರ್!..

newsbelgaum.in Belgaum  ;  ಟೊಮೆಟೋ ಬೆಲೆ ಏರಿಕೆಯಾಗಿ ಅಡುಗೆ ಮಾಡೋದು ಹೇಗೆ ಅಂತ ಗೃಹಿಣಿ ಯೋಚಿಸುತ್ತಿದ್ರೆ, ಮದ್ಯಪ್ರಿಯರು ತಮ್ಮ ಮೇಲಾಗುತ್ತಿರುವ ಬೆಲೆ ದೌರ್ಜನ್ಯ ಖಂಡಿಸಿ ಅಬಕಾರಿ ಇಲಾಖೆ ಮೊರೆ ಹೋಗಿದ್ದಾರೆ..

 

ಇದೀಗ ಮದ್ಯ ಪ್ರಿಯರ ಮನವಿಗೆ ಸ್ಪಂದಿಸಿರುವ ಅಬಕಾರಿ ಇಲಾಖೆ, ಹೆಚ್ಚು ಹಣ ಪಡೆಯುವ ಬಾರ್​ಗಳಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ..

 

ಕೆಲ ಬಾರ್ ಮಾಲೀಕರು ಸರ್ಕಾರದ ಹೆಸರಲ್ಲಿ ಮದ್ಯಪ್ರಿಯರಿಂದ ಮನಬಂದಂತೆ ಹಣ ಪಡೆದುಕೊಳ್ಳುತ್ತಿರುವ ಆರೋಪ ಕೇಳಿ ಬಂದಿದೆ..

 

ಶೇ.20ರಷ್ಟು ಅಬಕಾರಿ ಶುಲ್ಕಕ್ಕೆ ಹೆಚ್ಚುವರಿ 40-45% ಬಾರ್ ಮಾಲೀಕರು ಹಣ ಪಡೆಯುತ್ತಿದ್ದಾರೆ ಎಂದು ಮದ್ಯಪ್ರಿಯರು ಆರೋಪಿಸುತ್ತಿದ್ದಾರೆ..

 

ಪ್ರತಿ ಮದ್ಯದ ದರಕ್ಕಿಂತ 60-70 ರೂ. ಹೆಚ್ಚುವರಿ ಹಣ ಪಡೆಯುತ್ತಿದ್ದಾರೆ. ಹೆಚ್ಚುವರಿ ಹಣ ಕೇಳುತ್ತಿರುವ ಬಾರ್​ಗಳ ವಿರುದ್ಧ ಅಬಕಾರಿ ಇಲಾಖೆಗೆ ಸಾಲು ಸಾಲು ದೂರುಗಳು ಬಂದಿವೆ..

 

ದೂರುಗಳ ಬಂದ ಹಿನ್ನೆಲೆ ಹಣ ವಸೂಲಿ‌ ಮಾಡುವ ಬಾರ್ ಆಯಂಡ್ ರೆಸ್ಟೋರೆಂಟ್‌ ಗಳ ಮೇಲೆ ದಾಳಿ ಮಾಡಲು ಅಬಕಾರಿ ಇಲಾಖೆ ತಂಡ ರಚನೆ ಮಾಡಿದೆ. ದೂರು ಕೇಳಿ ಬಂದಿರುವ ಬಾರ್​ಗಳ ಮೇಲೆ ದಾಳಿ ನಡೆಯುವ ಸಾಧ್ಯತೆಗಳಿವೆ..

 

ಹೆಚ್ಚುವರಿ ಹಣ ಪಡೆಯುವ ಬಾರ್​ಗಳಿಗೆ ಅಬಕಾರಿ ಇಲಾಖೆ ಅಧಿಕಾರಿಗಳು ಮಾರುವೇಷದಲ್ಲಿ ಹೋಗಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹೆಚ್ಚುವರಿ ಹಣ ಪಡೆಯೋದು ಸಾಬೀತಾದ್ರೆ ಲೈಸೆನ್ಸ್​ ರದ್ದಾಗಲಿದೆ ಎಂದು ಅಬಕಾರಿ ಇಲಾಖೆ ಎಚ್ಚರಿಕೆ ನೀಡಿದೆ..

 

ಅಬಕಾರಿ ಕಮಿಷನರ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗುತ್ತಿದೆ. ಒಂದು ವೇಳೆ ತನಿಖೆ ವೇಳೆ ಸಿಕ್ಕರೆ ನಿಮ್ಮ ಬಾರ್ ಲೈಸನ್ಸ್ ಕ್ಯಾನ್ಸಲ್ ಮಾಡಲಾಗುತ್ತದೆ ಎಂದು ಅಬಕಾರಿ ಇಲಾಖೆಯ ಅಪರ ಆಯುಕ್ತರಾದ ನಾಗರಾಜಪ್ಪ ಹೇಳಿದ್ದಾರೆ..