Belagavi News In Kannada | News Belgaum

ಹೈಕೋರ್ಟ್​ ತೀರ್ಪಿಗೆ ತಲೆ ಬಾಗುತ್ತೇವೆ ಎಂದ ರೇವಣ್ಣ

ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಅನರ್ಹಗೊಳಿಸಿ ಹೈಕೋರ್ಟ್ ಆದೇಶಿಸಿದೆ. ಈ ಸಂಬಂಧ ಮಾತಾಡಿದ ಮಾಜಿ ಸಚಿವ ಹೆಚ್​​.ಡಿ ರೇವಣ್ಣ, ಯಾರೇ ಆಗಲಿ ಕಾನೂನಿಗೆ ತಲೆ ಬಾಗಲೇಬೇಕು. ನಾವು ಹೈಕೋರ್ಟ್​ ತೀರ್ಪಿಗೆ ತಲೆ ಬಾಗುತ್ತೇವೆ ಎಂದರು.
ನನಗೆ ಇನ್ನೂ ತೀರ್ಪಿನ ಪ್ರತಿ ಸಿಕ್ಕಿಲ್ಲ. ಹೈಕೋರ್ಟ್​ ತೀರ್ಪಿಗೆ ಯಾವುದೇ ವಿರೋಧ ಇಲ್ಲ. ಕಾನೂನಿಗೆ ಗೌರವ ನೀಡುವುದು ನಮ್ಮ ಕೆಲಸ. ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸರಿಯಾದ ಮಾಹಿತಿ ಕಲೆ ಹಾಕಿ ಮಾತಾಡುತ್ತೇನೆ ಎಂದರು.
ಇನ್ನು, ಜೆಡಿಎಸ್​ ಶಾಸಕ ಎ. ಮಂಜು ಏನು ಹೇಳಿದ್ದಾರೋ ಗೊತ್ತಿಲ್ಲ. ಯಾರು ಯಾವ ವಿಚಾರಕ್ಕೆ ಏನು ಮಾಡಿದ್ರೋ ಎಂದು ಗೊತ್ತಿಲ್ಲ. ಪ್ರಜ್ವಲ್​​ ರೇವಣ್ಣ ವಕೀಲರು ಇದ್ದಾರೆ. ಅವರೇ ಹೈಕೋರ್ಟ್​​​ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್​​ನಲ್ಲಿ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದರು.
ಏನಿದು ಆರೋಪ..? ಕಳೆದ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡಿದ್ದರು. ಈ ವೇಳೆ ಸುಳ್ಳು ಆದಾಯ ಪ್ರಮಾಣ ಪತ್ರ ಸಲ್ಲಿಕೆ ಮಾಡಿರೋ ಆರೋಪ ಪ್ರಜ್ವಲ್‌ ರೇವಣ್ಣ ವಿರುದ್ಧ ಕೇಳಿ ಬಂದಿತ್ತು. ಆದಾಯ ತೆರಿಗೆ ವಿವರಗಳ ಸಂಬಂಧ ನಕಲಿ ದಾಖಲೆ ಸಲ್ಲಿಸಿರೋ ಗಂಭೀರ ಆರೋಪ ಮಾಡಿದ್ದರು.
ಹೈಕೋರ್ಟ್​​ ಕೊಟ್ಟ ತೀರ್ಪೇನು? ಇನ್ನು, ಪ್ರಜ್ವಲ್‌ ಆಯ್ಕೆಯನ್ನು ಅಸಿಂಧು ಮಾಡಿ ಎಂದು ಹೈಕೋರ್ಟ್​​ನಲ್ಲಿ ಎ. ಮಂಜು ಮತ್ತು ದೇವರಾಜೇಗೌಡ ಎಂಬುವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ. ಮುಂದಿನ 6 ವರ್ಷ ಯಾವುದೇ ಚುನಾವಣೆಗೆ ಸ್ಪರ್ಧೆ ಮಾಡದಂತೆ ಆದೇಶ ಹೊರಡಿಸಿದೆ./////