Belagavi News In Kannada | News Belgaum

ಕಳಪೆ ಕಾಮಗಾರಿ ಕಂಡರೆ ಕಠಿಣ ಕ್ರಮ- ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದ ಸಚಿವರು

ಗೋಕಾಕ: ಗೋಕಾಕ, ಯಮಕನಮರಡಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಂಕಲಗಿ ಪಾಶ್ಚಾಪುರ ರಸ್ತೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿಯವರು ಪರಿಶೀಲಿಸಿ, ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಸೂಚಿಸಿದರು.


ರಸ್ತೆ ಅಗೆದು ಕಾಮಗಾರಿ ಗುಣಮಟ್ಟ ಪರಿಶೀಲನೆ: 
ಪಾಶ್ಚಾಪುರ-ಅಂಕಲಗಿ ರಸ್ತೆ ಕಾಮಗಾರಿ ಕುರಿತು ಸ್ವತಃ ಸಚಿವ್‌  ಸತೀಶ ಜಾರಕಿಹೊಳಿ  ಅವರು ಪಿಡ್ಬ್ಲೂಡಿ ಅಧಿಕಾರಿಗಳಿಂದ  ರಸ್ತೆ ಬದಿಯಲ್ಲಿ ಅಗೆದು ಕಾಮಗಾರಿ ಗುಣಮಟ್ಟದ ಬಗ್ಗೆ ಪರೀಕ್ಷಿಸಿದರು.


ನಂತರ ಮಾತನಾಡಿದ ಅವರು,ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಸ್ತೆ ನಿರ್ಮಿಸಬೇಕು. ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿಗೆ ಆಸ್ಪದವಿಲ್ಲ ಎಂದ ಅವರು, ರಸ್ತೆ ಕಾಮಗಾರಿಯಲ್ಲಿ ಕಳಪೆ ಕಂಡು ಬಂದರೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

 

ಈ ಸಂದರ್ಭದಲ್ಲಿ ಎಕ್ಸೆಕೇಟಿವ್ ಇಂಜಿನಿಯರ್‌ ಎಸ್. ಎನ್.‌ ಬಳೊಲ್‌, ಎಡಬ್ಲೂಇ ಶಿಂಗೆ, ಜೆ.ಇ. ನಾಗಾಭರಣ ಸೇರಿದಂತೆ ಹಲವು ಅಧಿಕಾರಿಗಳು, ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ್‌ ಸ್ಥಳದಲ್ಲಿದ್ದರು.