ಸತೀಶ ಶುಗರ್ಸ ಕಾರ್ಖಾನೆಯ ಬಾಯ್ಲರ್ ಪ್ರದೀಪನ ಸಮಾರಂಭಕ್ಕೆ ಚಾಲನೆ ನೀಡಿದ ಚೇರಮನ್ ಪ್ರದೀಪಕುಮಾರ ಇಂಡಿ..

ಗೋಕಾಕ: ಸತೀಶ ಶುಗರ್ಸ್ ಲಿ. ಹುಣಶ್ಯಾಳ ಪಿ. ಜಿ. ಕಾರ್ಖಾನೆಯಲ್ಲಿ ಮಂಗಳವಾರದಂದು ಪ್ರಸಕ್ತ ಹಂಗಾಮಿನ ಬಾಯ್ಲರ್ ಪ್ರದೀಪನ ಸಮಾರಂಭ ಜರುಗಿತು..
ತಾಲೂಕಿನ ಹುಣಶ್ಯಾಳ ಪಿ. ಜಿ.ಸತೀಶ ಶುಗರ್ಸ್ ಕಾರ್ಖಾನೆಯ ಬಾಯ್ಲರ್ ಪ್ರದೀಪನ ಕಾರ್ಯಕ್ರಮವನ್ನು ಕಾರ್ಖಾನೆಯ ಚೇರಮನ್ ಮತ್ತು ಮುಖ್ಯ ಹಣಕಾಸಿನ ಅಧಿಕಾರಿಗಳಾದ ಪ್ರದೀಪಕುಮಾರ ಇಂಡಿ ಅವರು ಅಗ್ನಿಪೂಜೆ ಮಾಡುವ ಮೂಲಕ ಬಾಯ್ಲರ್ ಪ್ರದೀಪನ ಕಾರ್ಯಕ್ರಮವನ್ನು ನೆರವೇರಿಸಿದರು..
ಕಾರ್ಯಕ್ರಮದಲ್ಲಿ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷರುಗಳಾದ ಎಲ್. ಆರ್.ಕಾರಗಿ, ಪಿ. ಡಿ. ಹಿರೇಮಠ ಉಪಾಧ್ಯಕ್ಷರುಗಳಾದ ವೀರು ತಳವಾರ, ಅಜೀಬಸಿಂಗ್ ರಾಣಾ ಹಾಗೂ ದೀಲಿಪ ಪವಾರ ಮತ್ತು ವಿವಿಧ ವಿಭಾಗಗಳ ಮೇಲಾಧಿಕಾರಿಗಳು, ಕಾರ್ಮಿಕ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು..